ಭಾನುವಾರ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ತಮಿಳುನಾಡಿನ ಮಾಜಿ ರಾಜ್ಯಪಾಲ ಪಿ.ಎಸ್.ರಾಮಮೋಹನ್ ರಾವ್ ಅವರ ಜೀವನಚರಿತ್ರೆ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ಸರ್ಕಾರದ ಸ್ಥಿರತೆ, ಸಾಮರಸ್ಯ ಹಾಗೂ ಉತ್ಪಾದಕತೆಯನ್ನು ನಿರ್ಧರಿಸುವುದೇ ಸಂವಿಧಾನದ ಶ್ರೇಷ್ಠತೆ. ಜನಾದೇಶವನ್ನು ಪ್ರತಿಬಿಂಬಿಸುವ ಸಂಸತ್ತು ಈ ಸಂವಿಧಾನದ ಪ್ರಮುಖ ನಿರ್ಮಾತೃ’ ಎಂದು ವಿವರಿಸಿದರು.