‘ಎಲ್ಲ ಹಂತದ ಅಧಿಕಾರಿಗಳು ಈ ಸೋಂಕಿನ ವಿರುದ್ಧದ ಹೋರಾಟದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲವು ಅಧಿಕಾರಿಗಳು ಸ್ವತಃ ಕೋವಿಡ್–19 ಪೀಡಿತರಾಗಿದ್ದರು, ಕೆಲವರು ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡರು. ಆದರೆ, ಅವರಾರೂ ಧೃತಿಗೆಡದೇ ಕೋವಿಡ್–19 ವಿರುದ್ಧದ ಹೋರಾಟಕ್ಕೆ ಆದ್ಯತೆ ನೀಡಿದರು’ ಎಂದು ಶ್ಲಾಘಿಸಿದರು.