‘ಬೆಂಗಳೂರು, ದೆಹಲಿ, ಭುವನೇಶ್ವರ, ಚೆನ್ನೈ, ಮುಂಬೈ, ಪುಣೆ, ಹೈದರಾಬಾದ್ ಮತ್ತು ಕೋಲ್ಕತ್ತದಲ್ಲಿ ಓಮೈಕ್ರಾನ್, ಸಮುದಾಯಕ್ಕೆ ಹರಡಿ ದೆಯೇ ಎಂಬುದನ್ನು ಪರಿಶೀಲಿಸ ಬೇಕಿದೆ. ಇದಕ್ಕಾಗಿ ಈ ನಗರಗಳಲ್ಲಿ ಕೋವಿಡ್ ದೃಢಪಡುವ ಪ್ರತಿ ವ್ಯಕ್ತಿಯ ಮೂಗು ಮತ್ತು ಗಂಟಲ ದ್ರವದ ಮಾದರಿಯನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ (ಜಿನೋಮ್ ಸೀಕ್ವೆನ್ಸಿಂಗ್) ಕಳುಹಿಸಬೇಕು. ಇದಕ್ಕಾಗಿ ಗುರುತಿಸಲಾದ ಪ್ರಯೋಗಾಲಯಗಳಲ್ಲೇ ಈ ವಿಶ್ಲೇಷಣೆ ನಡೆಸಬೇಕು’ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು (ಎನ್ಸಿಡಿಸಿ) ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ.