ಇದೇ ವೇಳೆ, ಕೋವಿಡ್–19 ಹಿಂದೆಂದೂ ಕಂಡುಕೇಳರಿಯದ, ಶತಮಾನಕ್ಕೆ ಒಮ್ಮೆ ಮಾತ್ರ ಎದುರಾಗುವ ಸಾಂಕ್ರಾಮಿಕ ರೋಗ. ಈ ಸಾಂಕ್ರಾಮಿಕ ಪ್ರತಿ ದೇಶವನ್ನೂ ಪರೀಕ್ಷಿಸಿದೆ. ಈ ಆಗಂತುಕವನ್ನು ಭಾರತ ಅತ್ಯಂತ ದಿಟ್ಟತನದಿಂದ ಎದುರಿಸಿದೆ. ಅದಕ್ಕಾಗಿ ಎಲ್ಲ ವಿಜ್ಞಾನಿಗಳಿಗೆ, ಆರೋಗ್ಯ ಸಿಬ್ಬಂದಿ ಮತ್ತು ಜನಸಾಮಾನ್ಯರಿಗೆ ಧನ್ಯವಾದ. ಇದರ ಫಲಿತಾಂಶವಾಗಿ ಕೈಗಾರಿಕೆ, ಆವಿಷ್ಕಾರ, ಬಂಡವಾಳ ಅಥವಾ ಅಂತರರಾಷ್ಟ್ರೀಯ ವ್ಯಾಪಾರ ಸೇರಿದಂತೆ ದೇಶದ ಪ್ರತಿ ಕ್ಷೇತ್ರವೂ ಹೊಸ ಚೈತನ್ಯ ಪಡೆದಿದೆ. ದೇಶವು ಎಲ್ಲ ಅಡೆತಡೆಗಳನ್ನು ಅವಕಾಶವಾಗಿ ಪರಿವರ್ತಿಸಿಕೊಂಡಿದೆ’ ಎಂದು ಹೇಳಿದರು.