ಹಲ್ಲು ನೋವಿನಿಂದಾಗಿ ಜ್ವರ ಬಂದಿರಬಹುದು ಎಂದೇ ಭಾವಿಸಿದ್ದ ಅಂಗಡಿ, ಮುಂಬೈಗ ತೆರಳಿ ಅಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ದೆಹಲಿ ತಲುಪಿದ ನಂತರವೂ ಎರಡು- ಮೂರು ದಿನಗಳ ಕಾಲ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಲ್ಲಿ ವಿಳಂಬ ಮಾಡಿದ್ದರು. ಜ್ವರ ತೀವ್ರವಾಗಿ ಗಂಟಲು ನೋವು, ಕೆಮ್ಮು ಕಾಣಿಸಿಕೊಂಡ ಬಳಿಕವಷ್ಟೇ ಅವರು ಏಮ್ಸ್ ಗೆ ದಾಖಲಾದರು ಎಂದು ಅವರ ಆಪ್ತ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.