ನವದೆಹಲಿ: ಕೋವಿಡ್ನಿಂದಾಗಿ ಅದರಲ್ಲೂ ವಿಶೇಷವಾಗಿ ಎರಡನೇ ಅಲೆಯ ಅವಧಿಯಲ್ಲಿ ಆಮ್ಲಜನಕ ಕೊರತೆಯಿಂದ ಎಷ್ಟು ಜನರು ಮೃತರಾಗಿದ್ದಾರೆ ಎಂಬ ಬಗ್ಗೆ ಲೆಕ್ಕ ಪರಿಶೋಧನೆ ನಡೆಸಬೇಕು ಎಂದು ಸಂಸತ್ತಿನ ಆರೋಗ್ಯ ಸ್ಥಾಯಿ ಸಮಿತಿಯು ಕೇಂದ್ರಆರೋಗ್ಯ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಕೋವಿಡ್ ಸಾವುಗಳ ದೃಢವಾದ ದಾಖಲೆ ಸಿದ್ಧಪಡಿಸಲು ರಾಜ್ಯಗಳ ಜತೆಗೆ ಸಮನ್ವಯದಿಂದ ಈ ಕೆಲಸ ಆಗಬೇಕು ಎಂದಿದೆ.