ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಮಲ್ಲಾ ರೆಡ್ಡಿ, ‘ಸಿಆರ್ಪಿಎಫ್ ಸಿಬ್ಬಂದಿ ನನ್ನ ಹಿರಿಯ ಮಗನನ್ನು ಇಡೀ ರಾತ್ರಿ ಥಳಿಸಿದ್ದಾರೆ. ಎದೆ ನೋವಿನ ನೆಪ ಹೇಳಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಮ್ಮ ಕುಟುಂಬದ ವೈದ್ಯರಿಗೆ ಆತನನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ಮಗನನ್ನು ಕಾಣಲು ನನಗೂ ಅನುಮತಿ ಕೊಟ್ಟಿಲ್ಲ. ಅಧಿಕಾರಿಗಳಿಗೆ ದಾಖಲೆಯಿಲ್ಲದ ಹಣ ದೊರೆತರೆ ಅದರಲ್ಲಿ ತಪ್ಪೇನಿದೆ. ಅವರು ಅವರ ಕರ್ತವ್ಯವನ್ನು ನಿಭಾಯಿಸಬೇಕು’ ಎಂದು ಅವರು ಹೇಳಿದ್ದಾರೆ.