ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ಅವರು ಜೀವ ಬೆದರಿಕೆ ಕುರಿತು ವಿವರಿಸಿದ್ದರು. ಬಳಿಕ, ಮಾಧ್ಯಮಗಳ ಜತೆ ಮಾತನಾಡಿರುವ ಅವರು, ‘ವಯನಾಡಿನ ಕಲ್ಪೆಟ್ಟಾದಿಂದ ಕೊಯಿಕೊಡೆಗೆ ತೆರಳುತ್ತಿದ್ದಾಗ ಕೆಲವು ವ್ಯಕ್ತಿಗಳು ಕಾರಿನಲ್ಲಿ ಮತ್ತು ದ್ವಿಚಕ್ರ ವಾಹನದಲ್ಲಿ ಕೊಡುವಳ್ಳಿ ಬಳಿ ಹಿಂಬಾಲಿಸಿದರು. ಸುಮಾರು 20 ಕಿಲೋ ಮೀಟರ್ ದೂರು ನನ್ನನ್ನು ಹಿಂಬಾಲಿಸಿದರು’ ಎಂದು ದೂರಿದ್ದಾರೆ.