ಡಿಡಿಎ ಅಧಿಕಾರಿಗಳು ಶಾಕರ್ಪುರ ಪ್ರದೇಶದಲ್ಲಿನ ಹಲವು ಮನೆಗಳನ್ನು ನೆಲಸಮ ಮಾಡಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್, ‘ಡಿಡಿಎ ಅಧಿಕಾರಿಗಳು ಬುಲ್ಡೋಜರ್ಗಳನ್ನು ತೆಗೆದುಕೊಂಡು ಹೋಗಿ ಏಕಾಏಕಿ ಮನೆಗಳನ್ನು ಕೆಡವುವಂತಿಲ್ಲ. ಮನೆ ತೆರವುಗೊಳಿಸಲು ನಿವಾಸಿಗಳಿಗೆ ನಿರ್ದಿಷ್ಟ ಕಾಲಾವಕಾಶ ನೀಡಬೇಕು. ಒಂದೊಮ್ಮೆ ಕೆಡವಲೇ ಬೇಕಾದ ಪರಿಸ್ಥಿತಿ ಎದುರಾದರೆ ಜನರಿಗೆ ಉಳಿದುಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದ್ದಾರೆ.