ಇಲ್ಲಿನ ಗುರುಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮುಂಬೈನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಿವಸೇನಾಕ್ಕೆ ತನ್ನ ಸ್ಥಾನವನ್ನು ತೋರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಪಕ್ಷಕ್ಕೆ ಸೂಚಿಸಿದ್ದಾರೆ. ಮುಂಬೈ ನಗರದೊಂದಿಗೆ ಇರುವ ಶಿವಸೇನಾದ ಸಂಬಂಧವನ್ನು ಮುರಿಯಲಾಗದು. ನಮ್ಮ ಪಕ್ಷವು ಇಂದಿಗೂ ಇಲ್ಲಿನ ಜನರೊಂದಿಗೆ ಗಾಢ ಸಂಪರ್ಕವನ್ನು ಹೊಂದಿದೆ. ಸಾಮಾನ್ಯ ಮುಂಬೈ ನಿವಾಸಿಗೂ ಅಗತ್ಯವಿದ್ದಾಗ ಸಹಾಯಕ್ಕಿದ್ದೇವೆ. ನಿಮಗೆ ಧೈರ್ಯವಿದ್ದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮನ್ನು ಸೋಲಿಸಿ’ ಎಂದು ಅವರು ಸವಾಲು ಎಸೆದಿದ್ದಾರೆ.