‘ಮತ್ತೆ ಒಟ್ಟಾಗಿರುವ ವಿರೋಧಪಕ್ಷಗಳ ನಾಯಕರು ಜಂಟಿ ಹೇಳಿಕೆ ಮೂಲಕ ಅಭಿವೃದ್ಧಿ ಚಿಂತನೆಗೆ ಧಕ್ಕೆ ತಂದಿದ್ದಾರೆ. ಭಾರತದ ಯುವಜನರಿಗೆ ಈಗ ಅವಕಾಶಗಳು ಬೇಕು, ಅಡೆತಡೆಗಳಲ್ಲ, ಅಭಿವೃದ್ಧಿ ಬೇಕು, ಇಬ್ಭಾಗವಲ್ಲ. ಎಲ್ಲ ಸ್ತರ ಹಾಗೂ ವಯಸ್ಸಿನ ಜನರು ಈಗ ಬಡತನದ ವಿರುದ್ಧ ಹೋರಾಟ ನಡೆಸಲು ಒಟ್ಟಾಗಿದ್ದಾರೆ. ಇದರಿಂದಾಗಿ ಭಾರತ ಪ್ರಗತಿ ಹೊಂದುತ್ತಿದೆ’ ಎಂದು ಹೇಳಿದ್ದಾರೆ.