ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಚಲೊ | ರೈತರನ್ನು ತಡೆಯಲು ಪೊಲೀಸ್‌ ಬಲ ಪ್ರಯೋಗ
LIVE

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ಪಂಜಾಬ್‌, ರಾಜಸ್ಥಾನ, ಉತ್ತರಪ್ರದೇಶ, ಕೇರಳ ರೈತರು ಶುಕ್ರವಾರ ಧರಣಿ ನಡೆಸಲು ದೆಹಲಿಗೆ ತೆರಳುತ್ತಿದ್ದು ಅವರನ್ನು ಹರಿಯಾಣ ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ. ಇಲ್ಲಿನ ಕರ್ಣ ಸರೋವರ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ರೈತರು ಜಮಾವಣೆಗೊಂಡಿದ್ದಾರೆ. ಇದರ ಕ್ಷಣ ಕ್ಷಣದ ಅಪ್ಡೇಟ್‌ ಇಲ್ಲಿದೆ...
Last Updated 26 ನವೆಂಬರ್ 2020, 12:42 IST
ಅಕ್ಷರ ಗಾತ್ರ
12:4226 Nov 2020

ರೈತರ ಹಿಮ್ಮೆಟ್ಟಿಸಲು ಜಲಫಿರಂಗಿ, ಅಶ್ರುವಾಯು

10:0926 Nov 2020

ರೈತ ಹೋರಾಟ: ದೆಲಹಿ-ಗುರುಗ್ರಾಮ ಗಡಿಯಲ್ಲಿ ವಾಹನ ದಟ್ಟಣೆ

ರೈತರ  ಜಾಥಾ ಹಿನ್ನೆಲೆಯಲ್ಲಿ ದೆಹಲಿ-ಗುರುಗ್ರಾಮ ಗಡಿಯಲ್ಲಿ ವಾಹನ ದಟ್ಟಣೆ ಸೃಷ್ಟಿಯಾಗಿರುವುದು 

10:0726 Nov 2020

ಪೊಲೀಸ್‌ ಬಲ ಪ್ರಯೋಗ: ದೇವೇಗೌಡ ಆಕ್ರೋಶ

ದೆಹಲಿ ರೈತ ಚಳವಳಿಯ ಚಿತ್ರಗಳನ್ನು ನೋಡಿ ಬೇಸರವಾಗಿದೆ. ರೈತರನ್ನು ಗೌರವದಿಂದ ಕಾಣುವಂತೆ ಕೇಂದ್ರ ಸರ್ಕಾರವನ್ನು ಕೋರುತ್ತೇನೆ. ದಯವಿಟ್ಟು ಅವರೊಂದಿಗೆ ಮಾತನಾಡಿ. ಅವರ ಮಾತುಗಳನ್ನು ಕೇಳಿ. ಪೊಲೀಸ್ ಪಡೆ ಸಮಸ್ಯೆಯನ್ನು ಪರಿಹರಿಸದು 

09:2426 Nov 2020

ದೆಹಲಿ-ಹರಿಯಾಣ ಗಡಿಯಲ್ಲಿ ಬಿಗಿ ಭದ್ರತೆ: ರೈತರ ಜಾಥಾ ಮೇಲೆ ನಿಗಾ ಇಡಲು ಡ್ರೋಣ್‌ ಕ್ಯಾಮೆರಾಗಳ ಬಳಕೆ

08:1126 Nov 2020

ಅಂಬಲಾದ ಸೋದ್‌ಪುರ ಗಡಿಯಲ್ಲಿ ಪೊಲೀಸರು ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಿದರು

08:0126 Nov 2020

ರೈತರ ಶಾಂತಿಯುತ ಪ್ರತಿಭಟನೆ ಹತ್ತಿಕ್ಕುವುದು ಸರಿಯಲ್ಲ –ಕೇಜ್ರಿವಾಲ್‌

07:2926 Nov 2020

ಕರ್ಣ ಸರೋವರ ಸೇತುವೆ ಮೇಲೆ ನೆರೆದಿದ್ದ ರೈತರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿದರು

07:1626 Nov 2020

ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ, ಜಲಫಿರಂಗಿಗಳನ್ನು ಬಳಸಲಾಗಿದೆ, ಸಂವಿಧಾನ ದಿನಾಚರಣೆ ದಿನವಾದ ಇಂದು ರೈತರು ತಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ಕೇಳಲು ದೆಹಲಿಗೆ ಬರುತ್ತಿದ್ದಾರೆ. ಅವರನ್ನು ತಡೆಯಬೇಡಿ ಎಂದು ಯೋಗೇಂದ್ರ ಯಾದವ್‌ ಟ್ವೀಟ್‌ ಮಾಡಿದ್ದಾರೆ.

06:5426 Nov 2020

ಹರಿಯಾಣದ ಗಡಿಯಲ್ಲಿ ಸಾವಿರಾರು ಜನ ರೈತರು ದೆಹಲಿಗೆ ತೆರಳಲು ಕರ್ನಾಲ್ ನ ಕರ್ಣ ಸರೋವರ ಪ್ರದೇಶದ ಬಳಿ ಜಮಾಯಿಸಿದ್ದಾರೆ

06:4926 Nov 2020

ಜಲಫಿರಂಗಿ, ಅಶ್ರುವಾಯು ಪ್ರಯೋಗ