ಪ್ರಜಾವಾಣಿ ಸಹೋದರ ಪತ್ರಿಕೆ ‘ಡೆಕ್ಕನ್ ಹೆರಾಲ್ಡ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷ ಸ್ಥಾನದ ವಿಚಾರದಲ್ಲಿ ನಿರ್ವಾತ ಸೃಷ್ಟಿಯಾಗಿದೆ. ಇದನ್ನು ಆಮ್ ಆದ್ಮಿ ಪಕ್ಷವು (ಎಎಪಿ) ತುಂಬಲಿದೆ ಎಂದು ಈಗಲೇ ಹೇಳುವುದು ಅಹಂಕಾರದ ಮಾತಾಗುತ್ತದೆ. ಯಾಕೆಂದರೆ ನಮ್ಮ ಪಕ್ಷವು ತುಂಬಾ ಚಿಕ್ಕದಾಗಿದೆ. ರಾಷ್ಟ್ರಮಟ್ಟದ ನಿರ್ವಾತವನ್ನು ತುಂಬಬಹುದೇ ಎಂಬುದನ್ನು ಸಮಯವೇ ಹೇಳಬೇಕಷ್ಟೆ ಎಂದು ಹೇಳಿದ್ದಾರೆ.