ಸಿಬಿಐ ದಾಖಲಿಸಿರುವ ಎಫ್ಐಆರ್ನ ಅನುಸಾರ, ಆಪ್ನ ಕಾರ್ಯಕರ್ತ ವಿಜಯ್ ನಾಯರ್, ಮನೋಜ್ ರಾಯ್, ಅಮನ್ದೀಪ್ ಧಲ್ ಮತ್ತು ಸಮೀರ್ ಮಹಂದ್ರು ಅವರು ಅಬಕಾರಿ ನೀತಿಯ ರಚನೆ ಮತ್ತು ಅದರ ಅನುಷ್ಠಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಿಬಿಐ ಎಫ್ಐಆರ್ ಆಧರಿಸಿ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ.