ಪೂರ್ವ ದೆಹಲಿಯ ಕಂಠಿನಗರದಲ್ಲಿ ‘ಡಾ.ಭೀಮ್ ರಾವ್ ಅಂಬೇಡ್ಕರ್ ಹಿರಿಯ ನಾಗರಿಕರ ನಿಲಯ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಈ ಹಿಂದೆಯೇ ದೆಹಲಿ ಸರ್ಕಾರ ಹಿರಿಯ ನಾಗರಿಕರನ್ನು ತೀರ್ಥ ಯಾತ್ರೆಗೆ ಕಳುಹಿಸಲು ಯೋಜನೆ ರೂಪಿಸಿತ್ತು. ಆದರೆ 2020 ಮತ್ತು 21ರಲ್ಲಿ ಕೋವಿಡ್ನಿಂದ ಸಾಧ್ಯವಾಗಿರಲಿಲ್ಲ. ಈಗ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ. ‘ಮುಖ್ಯಮಂತ್ರಿ ತೀರ್ಥ ಯಾತ್ರೆ ಯೋಜನೆ’ ಮೂಲಕ ಹಿರಿಯ ನಾಗರಿಕರು ಸರ್ಕಾರದ ವೆಚ್ಚದಲ್ಲಿ ತೀರ್ಥ ಯಾತ್ರೆ ಕೈಗೊಳ್ಳಬಹುದು’ ಎಂದು ತಿಳಿಸಿದರು.