ನಿರ್ದಿಷ್ಟ ಸಮುದಾಯವನ್ನು ಉದ್ದೇಶಿಸಿ ದ್ವೇಷ ಕಾರುವವರದು ತಾರತಮ್ಯ ಮನಸ್ಥಿತಿಯಷ್ಟೇ ಅಲ್ಲ. ಬಹಿಷ್ಕಾರ, ಹತ್ಯಾಕಾಂಡದ ಮನಸ್ಥಿತಿಗೆ ಸಮಾನವಾದುದು. ಹಾಲಿ ಇರುವ ಶಾಸನಬದ್ಧ ನಿಯಮಗಳು ಹಾಗೂ ದಂಡ ಸಂಹಿತೆಯಲ್ಲಿರುವ ಅಂಶಗಳು ಈ ಪಿಡುಗು ಹತ್ತಿಕ್ಕಲು ಹಾಗೂ ನಾಗರಿಕ ಸಮಾಜಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.