ಆಶೀಶ್ಕುಮಾರ್ ಶ್ರೀವಾಸ್ತವ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ. ‘ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದೇನೆ ಎಂಬುದಾಗಿ ಸತ್ಯೇಂದ್ರ ಜೈನ್ ಅವರು ವಿಚಾರಣಾ ನ್ಯಾಯಾಲಯದಲ್ಲಿ ಹೇಳಿರುವುದು ವರದಿಯಾಗಿದೆ. ಹೀಗಾಗಿ, ಶಾಸಕನಾಗಿ ಮುಂದುವರಿಯಲು ಜೈನ್ ಅವರಿಗೆ ಅನುಮತಿ ನೀಡಬಾರದು’ ಎಂದು ಶ್ರೀವಾಸ್ತವ ಅವರು ಪಿಐಎಲ್ನಲ್ಲಿ ಕೋರಿದ್ದರು.