ನವದೆಹಲಿ: ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪೈಕಿ ಕೆಲವು ನಾಯಕರು ಹಾಗೂ ಸಂಸದರು, ತಮ್ಮನ್ನು ‘24 ಅಕ್ಬರ್ ರಸ್ತೆ’ಯಲ್ಲಿರುವ ಎಐಸಿಸಿ ಪ್ರಧಾನ ಕಛೇರಿ ಒಳಗೆ ತೆರಳಲು ಪೊಲೀಸರು ಬಿಡುತ್ತಿಲ್ಲ ಎಂದು ದೂರಿದ್ದಾರೆ. ತಮ್ಮನ್ನು ಮನೆಗೆ ತೆರಳಲೂ ಪೊಲೀಸರು ಬಿಡುತ್ತಿಲ್ಲ ಎಂದು ಅನೇಕ ಸಂಸದರು ಆರೋಪಿಸಿದ್ದಾರೆ.