ನವದೆಹಲಿ: ಗಣರಾಜ್ಯೋತ್ಸವದ ಪಥಸಂಚಲನಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಬಿಗಿಗೊಳಿಸುತ್ತಿರುವಾಗಲೇ ಖಾಲಿಸ್ಥಾನಿ ಉಗ್ರ ಸಂಘಟನೆಯ ನಂಟು ಹೊಂದಿರುವ ಇಬ್ಬರು ಶಂಕಿತ ಉಗ್ರರನ್ನು ದೆಹಲಿ ಪೊಲೀಸರು ಶುಕ್ರವಾರ ಪಂಜಾಬ್ನಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಕೆನಡಾ ಮೂಲದ ಪಾತಕಿ, ಉಗ್ರ ಲಖ್ಬಿರ್ ಸಿಂಗ್ ಲಾಂಡಾನ ಸಹಚರರಾದ, ಪಂಜಾಬ್ನ ಗುರ್ದಾಪುರದ ನಿವಾಸಿ ರಾಜನ್ ಭಟ್ಟಿ, ಫಿರೋಜ್ಪುರದ ಕನ್ವಾಲ್ಜೀತ್ ಸಿಂಗ್ ಯಾನೆ ಚಿನ್ನಾ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಖಾಲಿಸ್ಥಾನಿ ಭಯೋತ್ಪಾದಕ- ಪಾತಕಿಗಳ ಜಾಲದ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಭಟ್ಟಿಯನ್ನು ಬಂಧಿಸಲಾಯಿತು. ಈತ ದೇಶದಿಂದ ಪರಾರಿಯಾಗಿರುವ ಪಾತಕಿ ಲಾಂಡಾ ಹರಿಕ್ನ ಸಹಚರನಾಗಿದ್ದಾನೆ. ಈತ ಹಲವು ಪ್ರಕರಣಗಳಲ್ಲಿ ಪಂಜಾಬ್ ಪೊಲೀಸರಿಗೆ ಬೇಕಾಗಿದ್ದ ಎಂದು ಡಿಸಿಪಿ (ವಿಶೇಷ ಘಟಕ) ಮನೀಶಿ ಚಂದ್ರ ತಿಳಿಸಿದರು.