ಅಗ್ನಿಶಾಮಕ ಇಲಾಖೆಯ ಪ್ರಕಾರ, ದೆಹಲಿ ಸರ್ಕಾರ ಮಾಲಿನ್ಯ ತಾಣಗಳಾಗಿ ಘೋಷಿಸಿದ 13 ಸ್ಥಳಗಳಲ್ಲಿ ಪ್ರತಿದಿನ ಸುಮಾರು ಎರಡು ಲಕ್ಷ ಲೀಟರ್ ನೀರನ್ನು ಸಿಬ್ಬಂದಿ ಸಿಂಪಡಿಸುತ್ತಿದ್ದಾರೆ. ಜಹಾಂಗೀರ್ಪುರಿ, ನರೇಲ, ಅಶೋಕ್ ವಿಹಾರ್, ವಿವೇಕ್ ವಿಹಾರ್, ದ್ವಾರಕಾ, ಮುಂಡ್ಕಾ, ರೋಹಿಣಿ, ವಾಜೀರ್ಪುರ, ಓಖ್ಲಾ, ಬವಾನ, ಆನಂದ್ ವಿಹಾರ್, ಪಂಜಾಬಿ ಬಾಗ್ ಮತ್ತು ಆರ್.ಕೆ.ಪುರಂ – ಇವು ನೀರು ಸಿಂಚನ ಮಾಡುತ್ತಿರುವ ಪ್ರಮುಖ ತಾಣಗಳು.