ಇಲ್ಲಿನ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜೋರಿ, ಚೆನಾಬ್ ಕಣಿವೆಯಲ್ಲಿ ಬಹುಸಂಖ್ಯಾತ ಸಮುದಾಯಗಳನ್ನು ದುರ್ಬಲಗೊಳಿಸಲು ಬಿಜೆಪಿ ಬಯಸಿದೆ. ಅನಂತನಾಗ್ ಲೋಕಸಭಾ ಕ್ಷೇತ್ರವನ್ನು ಜಮ್ಮು ಪ್ರದೇಶಗಳೊಂದಿಗೆ ವಿಲೀನಗೊಳಿಸಲು ಮುಂದಾಗಿದ್ದು, ಇದರಿಂದ ಕಣಿವೆಯ ಮತದಾರರು ಅಪ್ರಸ್ತುತರಾಗುತ್ತಾರೆ. 6 ತಿಂಗಳವರೆಗೆ ಕಣಿವೆಯ ಹೆದ್ದಾರಿ ಬಂದ್ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಕಣಿವೆ ಪ್ರದೇಶದ ಜನರು ರಾಜೌರಿ ಹಾಗೂ ಚೆನಾಬ್ ಕಣಿವೆಯನ್ನು ತಲುಪುವುದು ಹೇಗೆ’ ಅವರು ಎಂದು ಪ್ರಶ್ನಿಸಿದರು.