‘ಈಗಾಗಲೇ ಕೇಂದ್ರಸರ್ಕಾರ ಒಬಿಸಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪಂಗಡಗಳಿಗೆ ಹೋಲಿಸಿದರೆ, ವೀರಶೈವ ಲಿಂಗಾಯತ ಒಳಪಂಗಡಗಳಲ್ಲಿ ಶೇ 51.06ರಷ್ಟು ಅನಕ್ಷರಸ್ಥರು ಇದ್ದಾರೆ. ಭೂರಹಿತರ ಪ್ರಮಾಣ ಶೇ 11.6ರಷ್ಟಿದೆ. ಅದೇ ಈಗಾಗಲೇ ಒಬಿಸಿ ಪಟ್ಟಿಯಲ್ಲಿರುವ ಭೂರಹಿತರ ಪ್ರಮಾಣ ಶೇ 0.27ರಷ್ಟು ಮಾತ್ರ ಎಂದು ಚಿನ್ನಪ್ಪರೆಡ್ಡಿ ಆಯೋಗ ಹೇಳಿತ್ತು. ಈ ದತ್ತಾಂಶಗಳನ್ನು ಪರಿಗಣಿಸಿ, ಉಳಿದ ಪಂಗಡಗಳನ್ನೂ ಒಬಿಸಿ ಪಟ್ಟಿಗೆ ಸೇರಿಸಬೇಕು’ ಎಂದರು.