''ಕಳೆದ 7 ವರ್ಷಗಳಲ್ಲಿ, ಮಹಾರಾಷ್ಟ್ರದಲ್ಲಿ 5 ಲಕ್ಷ ಕೋಟಿ ಮೌಲ್ಯದ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸುವ ಅವಕಾಶ ಸಿಕ್ಕಿದೆ. ಬಂದರು, ಮೀನುಗಾರಿಕೆ, ಜಲ ಸಂಪನ್ಮೂಲ, ಎಂಎಸ್ಎಂಇ ಮತ್ತು ರಸ್ತೆ ಸಾರಿಗೆ ಖಾತೆಗಳನ್ನು ನಿರ್ವಹಿಸಿದ್ದೇನೆ. ಆದರೆ ನಾನೊಬ್ಬ ಮಹಾರಾಷ್ಟ್ರದ ರಾಯಭಾರಿ ಎಂದೇ ಭಾವಿಸಿದ್ದೇನೆ. ನಾನು ಸದಾ ಛತ್ರಪತಿ ಶಿವಾಜಿ ಮಹಾರಾಜರ ಭೂಮಿಯ ಏಳ್ಗೆಯನ್ನು ಬಯಸುತ್ತೇನೆ'' ಎಂದು ಗಡ್ಕರಿ ಹೇಳಿದರು.