ಉತ್ತರ24 ಪರಗಣ ಜಿಲ್ಲೆಯಲ್ಲಿ ಬಿಎಸ್ಎಫ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಗಡಿಗಳು ಅಭೇಧ್ಯವಾಗಿರುವಂತೆ ಬಿಎಸ್ಎಫ್ ಯೋಧರು ನೋಡಿಕೊಳ್ಳಬೇಕು. ಗಡಿಗಳ ರಕ್ಷಣೆ ಅವರ ಸಾಂವಿಧಾನಿಕ ಹಕ್ಕು. ಸ್ಥಳೀಯ ಬೆಂಬಲವಿಲ್ಲದೇ ಒಳನುಸುಳುವಿಕೆ ಹಾಗೂ ಕಳ್ಳಸಾಗಣೆಯನ್ನು ತಡೆಯುವುದು ಕಷ್ಟ. ಸಾರ್ವಜನಿಕರ ಒತ್ತಡದಿಂದಾಗಿ, ಸ್ಥಳೀಯ ಅಧಿಕಾರಿಗಳು ಬಲವಂತವಾಗಿ ಸಹಾಯ ಮಾಡುವಂತೆ ನೀಡುವ ರಾಜಕೀಯ ಪರಿಸ್ಥಿತಿ ಶೀಘ್ರದಲ್ಲೇ ಬರಬಹುದು’ ಎಂದು ಹೇಳಿದರು.