‘ತಿಹಾರ್ ಜೈಲಿನ 7ನೇ ನಂಬರ್ನ ಬ್ಯಾರಕ್ಗೆ ತೆರಳಿದ್ದ ನನಗೆ ಮೊದಲು ಮೊಹಿಸಿನ್ ಪರಿಚಿತನಾದ. ನನ್ನನ್ನು ಇರಿಸಿದ್ದ ಸೆಲ್ನಲ್ಲೇ ಇದ್ದ ಆತ ನನ್ನ ಬಟ್ಟೆ, ಪಾತ್ರೆ, ಸ್ವಚ್ಛಗೊಳಿಸಿ ಕೊಡುತ್ತಿದ್ದುದಲ್ಲದೆ, ಕುಡಿಯಲು ನೀರು,
ಚಹಾ ತಂದು ಕೊಡುತ್ತ ಸೇವೆ ಮಾಡಿದ. ಇನ್ನೊಬ್ಬ ಪದವೀಧರ ನನಗೆ ಸ್ವಲ್ಪ ಹಿಂದಿ ಕಲಿಸಿದ. ಜಾಮೀನು ಪಡೆದು ಹೊರ ಬಂದ ಕೆಲವು ದಿನಗಳ ನಂತರ ಇಬ್ಬರಿಗೂ ತಲಾ ₹ 4.50 ಲಕ್ಷ ನೀಡಿ, ಅವರಿಗೆ ನೆರವು ನೀಡಿದೆ’ ಎಂದು ಸೋಮವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಡಿ.ಕೆ. ಶಿವಕುಮಾರ್ ವಿವರಿಸಿದರು.