ಈ ಮಧ್ಯೆ, ‘ತಮಿಳಿಗ ವಜ್ವುರಿಮೈ ಕಚ್ಚಿ’ ನಾಯಕ ಮತ್ತು ತಮಿಳುನಾಡು ವಿಧಾನಸಭೆಯ ಸದಸ್ಯ ಟಿ. ವೇಲ್ಮುರುಗನ್ ಕೂಡ ಈ ಕ್ರಮವನ್ನು ವಿರೋಧಿಸಿದ್ದಾರೆ. ‘ಇದು ಹಿಂದಿಯ ನಿರ್ಲಜ್ಜ ಹೇರಿಕೆ’ ಎಂದು ಅವರು ಕರೆದಿದ್ದಾರೆ. ಅಲ್ಲದೇ, ಕೂಡಲೇ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.