‘ನಾಯಿ ಕಚ್ಚುತ್ತಿದ್ದುದನ್ನು ಕಂಡರೂ ಶಂಕರ್ ನನಗೆ ಸಹಾಯ ಮಾಡಲಿಲ್ಲ. ಗಂಭೀರವಾಗಿ ಗಾಯಗೊಂಡಿದ್ದ ನಾನು ಲೋಕ ಬಂಧು ಆಸ್ಪತ್ರೆಗೆ ತೆರಳಿದೆ. ನನ್ನ ಸ್ಥಿತಿ ಕಂಡ ಅಲ್ಲಿನ ವೈದ್ಯರು ಕೆಜಿಎಂಯು ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದರು. ಎರಡು ದಿನ ಅಲ್ಲಿ ಚಿಕಿತ್ಸೆ ಪಡೆದೆ. ಸುದೀರ್ಘ ಅವಧಿವರೆಗೂ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ವೈದ್ಯರು ಸೂಚಿಸಿದ್ದಾರೆ ಎಂದು ಸಂಕಲ್ಪ್ ದೂರಿನಲ್ಲಿ ಹೇಳಿದ್ದಾರೆ. ಶಂಕರ್ ಅವರು ತಮ್ಮನ್ನು ನಾಯಿ ದಾಳಿಯಿಂದ ಪಾರು ಮಾಡಲಿಲ್ಲ ಎಂದೂ ದೂರಿನಲ್ಲಿ ವಿವರಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.