ನವದೆಹಲಿ: ನೂತನ ಕೃಷಿ ಕಾಯ್ದೆಗಳ ಕುರಿತು ರೈತರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಯಾವಾಗಲೂ ಸಿದ್ಧ. ಆದರೆ, ರೈತರ ಪ್ರತಿಭಟನೆ ಮತ್ತೊಂದು ಶಾಹೀನ್ಬಾಗ್ ಆಗಿಸಬಾರದು ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಗೆ ಬಿಜೆಪಿ ಬುಧವಾರ ಹೇಳಿದೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದಿಸುವ ನಿರ್ಣಯದ ಮೇಲೆ ಮಾತನಾಡಿದ ಬಿಜೆಪಿ ಸಂಸದ ಭುವನೇಶ್ವರ ಕಲಿತಾ, ಸರ್ಕಾರಕ್ಕೆ ರೈತರ ಬಗ್ಗೆ ಗೌರವ ಇದೆ. ಮಾತುಕತೆಗೆ ಅವರಿಗೆ ಯಾವಾಗಲೂ ಬಾಗಿಲು ತೆರೆದಿರುತ್ತದೆ ಎಂದರು.
‘ನೂತನ ಕೃಷಿ ಕಾಯ್ದೆಗಳ ಮೂಲಕ ರೈತರಿಗೆ ಹೊಸ ಹಕ್ಕುಗಳನ್ನು ಸರ್ಕಾರ ನೀಡಿದೆ. ಸಂಸತ್ನಲ್ಲಿ ವಿಸ್ತೃತ ಚರ್ಚೆ ನಡೆಸಿದ ನಂತರವೇ ಈ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಅವರಿಗಿರುವ ಯಾವ ಸೌಲಭ್ಯಗಳನ್ನೂ ಈ ಕಾಯ್ದೆಗಳ ಮೂಲಕ ಕಿತ್ತುಕೊಂಡಿಲ್ಲ’ ಎಂದು ಹೇಳಿದರು.