ದೊಡ್ಡ ಮಟ್ಟದ ಭೂಕಂಪಗಳು ಸಂಭವಿಸಿದರೆ ಅದನ್ನು ನಿರ್ವಹಿಸಲು ದೇಶ ಸನ್ನದ್ಧವಾಗಿದೆ. ದೇಶದಲ್ಲಿ ಉತ್ತಮ ತರಬೇತಿ ಹೊಂದಿದ, ಉಪಕರಣಗಳಿಂದ ಸನ್ನದ್ಧವಾದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ (ಎನ್ಡಿಆರ್ಎಫ್) ಇದೆ. ಯಾವ ಸಮಯದಲ್ಲಾದರೂ ಯಾವ ಪ್ರದೇಶಕ್ಕಾದರೂ ತ್ವರಿತವಾಗಿ ಈ ಪಡೆ ತಲುಪುತ್ತದೆ ಎಂದು ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರದ ನಿರ್ದೇಶಕ ಒ.ಪಿ. ಮಿಶ್ರಾ ಅವರು ತಿಳಿಸಿದ್ದಾರೆ.