ನವದೆಹಲಿ: ಗಡಿಯಲ್ಲಿ ಉದ್ಭವಿಸಿರುವ ಸಂಘರ್ಷ ಪರಿಸ್ಥಿತಿ ಶಮನವಾಗಬೇಕಾದರೆ ಪೂರ್ವ ಲಡಾಖ್ನ ಆಯಕಟ್ಟಿನ ಸ್ಥಳಗಳಿಂದ ಯೋಧರನ್ನು ಹಿಂದಕ್ಕೆ ಕರೆಸುವ ಪ್ರಕ್ರಿಯೆ ಶೀಘ್ರ ಮತ್ತು ಸಂಪೂರ್ಣವಾಗಿ ನೆರವೇರಬೇಕು ಎಂದು ಭಾರತ ಪುನರುಚ್ಚರಿಸಿದೆ.
ಸಂಘರ್ಷ ಪರಿಸ್ಥಿತಿಯನ್ನು ಶಮನಗೊಳಿಸುವ ಸಂಬಂಧ ಭಾರತ ಮತ್ತು ಚೀನಾದ ಭದ್ರತಾ ಪಡೆಗಳ ಉನ್ನತ ಅಧಿಕಾರಿಗಳ ನಡುವೆ ಸೋಮವಾರ (ಅ. 12) ನಡೆಯಲಿರುವ 7ನೇ ಸುತ್ತಿನ ಮಾತುಕತೆ ವೇಳೆ ಭಾರತ ತನ್ನ ಈ ನಿಲುವನ್ನು ಸ್ಪಷ್ಟಪಡಿಸಲಿದೆ ಎಂದು ಮೂಲಗಳು ಹೇಳಿವೆ.
ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಚುಶೂಲ್ನಲ್ಲಿ ಮಾತುಕತೆ ನಡೆಯಲಿದೆ.