ಬಾರಾನಗರ್ನಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿ. ಕೇಂದ್ರದ ಪಡೆಗಳು ಅಲ್ಲಿರಲಿವೆ. ನಿಮ್ಮನ್ನು ಬೆದರಿಸುವ ಧೈರ್ಯವನ್ನು ಯಾರೂ ತೋರಲಾರರು. ಯಾರಾದರೂ ಅಂಕೆ ಮೀರಿದರೆ ಮತ್ತಷ್ಟು ಸೀತಾಲಕುಕುಚಿ ನಿರ್ಮಾಣವಾಗಲಿವೆ. ಅಲ್ಲಿ ಏನಾಗಿದೆ ಎಂಬುದನ್ನು ನೀವು ನೋಡಿದ್ದೀರಿ. ಹೀಗಾಗಿ ಎಚ್ಚರಿಕೆಯಿಂದಿರಿ’ ಎಂದು ಘೋಷ್ ಹೇಳಿದ್ದರು.