ಶಿವಸೇನಾ ನಾಯಕ ಮತ್ತು ಮಹಾರಾಷ್ಟ್ರ ಸಚಿವ ಅನಿಲ್ ಪರಬ್ಗೆ ಇ.ಡಿಯು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾವುತ್ ಅವರು,‘ ಮಹಾ ವಿಕಾಸ್ ಆಘಾಡಿ’ಯ (ಎಂವಿಎ) ಬಲಿಷ್ಠ ಗೋಡೆಯನ್ನು ಒಡೆಯುವ ಪ್ರಯತ್ನಗಳು ವಿಫಲವಾದ ನಂತರ ಇಂತಹ ಪ್ರೇಮ ಪತ್ರಗಳ ಸಂಖ್ಯೆಯು ಹೆಚ್ಚಿದೆ’ ಎಂದು ಹೇಳಿದರು.