ಇ.ಡಿ. ವಿಚಾರಣೆಗೆ ಹಾಜರಾಗುವ ಮುನ್ನ ರಾಹುಲ್ ಗಾಂಧಿ ಅವರು ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಬಂದರು. ಈ ವೇಳೆ, ರಾಜ್ಯ ಮುಖಂಡರು ರಾಹುಲ್ ಅವರನ್ನು ಭೇಟಿಯಾಗಲು ಉದ್ದೇಶಿಸಿದ್ದರು. ಅದಕ್ಕಾಗಿ ಕಾಂಗ್ರೆಸ್ ಕಚೇರಿಯತ್ತ ಸಾಗಿದರು. ಇದಕ್ಕೆ ದೆಹಲಿ ಪೊಲೀಸರು ಅವಕಾಶ ನೀಡಲಿಲ್ಲ. ‘ನಾವು ಪ್ರತಿಭಟನೆ ನಡೆಸುತ್ತಿಲ್ಲ. ಪಕ್ಷದ ಕಚೇರಿಗೆ ಹೋಗು ತ್ತಿದ್ದೇವೆ’ ಎಂದು ಡಿ.ಕೆ. ಸುರೇಶ್ ಸಮಜಾಯಿಷಿ ನೀಡಿದರು. ಪೊಲೀಸರು ಅದನ್ನು ಒಪ್ಪಲಿಲ್ಲ. ಇಂತಹ ಧೋರಣೆ ಸರಿಯಲ್ಲ ಎಂದು ಸುರೇಶ್ ಹೇಳಿದರು. ಆ ವೇಳೆ, ಪೊಲೀಸರು ಹಾಗೂ ಸುರೇಶ್ ನಡುವೆ ವಾಗ್ವಾದ ನಡೆಯಿತು.