ಮಹೂ–ಖಾರಿ ಪಂಚಾಯತ್ನ ಸರಪಂಚರು, ಗಾಯಾಳುಗಳಾದ ಮೊಹಮ್ಮದ್ ರಫೀಕ್, ಬಿಲಾಲ್ ಅಹ್ಮದ್ ಮತ್ತು ಅಬ್ದುಲ್ ರಶೀದ್ ಅವರೊಂದಿಗೆ, ಖಾರಿಯಲ್ಲಿರುವ ಪೊಲೀಸ್ ಹೊರಠಾಣೆಗೆ ತೆರಳಿ ದೂರು ನೀಡಿದ್ದರು. ‘ಈ ಮೂವರು ಕುರಿ ಮತ್ತು ಮೇಕೆಗಳನ್ನು ಖರೀದಿಸಲು ಅರಣ್ಯ ಪ್ರದೇಶಕ್ಕೆ ಹೋದಾಗ ಸೈನಿಕರು ಯಾವುದೇ ಕಾರಣವಿಲ್ಲದೇ ಈ ಮೂವರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ಮೊಬೈಲ್ ಫೋನ್ ಮತ್ತು ಸ್ವಲ್ಪ ಹಣವನ್ನು ಹಸಿದುಕೊಂಡಿದ್ದಾರೆ‘ ಎಂದು ಸರಪಂಚ್ ಆರೋಪಿಸಿ, ದೂರು ನೀಡಿದ್ದರು.