‘ಜತ್ತ ತಾಲ್ಲೂಕು ಜನರು ಮಧ್ಯರಾತ್ರಿ ಅರ್ಧ ಗಂಟೆಯ ಹೊತ್ತಿಗೆ ನನ್ನನ್ನು ಭೇಟಿಯಾಗಲು ಬಂದರು. ಅವರಿಗಾಗಿ ಮಹಿಷಾಳ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲು ಸರ್ಕಾರವಾಗಿ ನಾವು ನಿರ್ಧರಿಸಿದ್ದೇವೆ. ಮಹಿಷಾಳ ಕಾಲುವೆ ಮೂಲಕ ಏಳೆಂಟು ಕೆರೆಗಳನ್ನು ಹೇಗೆ ತುಂಬಿಸಬಹುದು ಎಂಬುದನ್ನೂ ನಿರ್ಧರಿಸುತ್ತಿದ್ದೇವೆ. ಆದ್ದರಿಂದ ಅವರಿಗೆ ತಕ್ಷಣವೇ ಸಹಾಯ ಮಾಡಬಹುದು’ ಎಂದರು. ‘ಮಹಾರಾಷ್ಟ್ರದಿಂದ ನಮಗೆ ಸೇವೆ ಸಿಗದೆ, ವಂಚಿತರಾಗಿದ್ದೇವೆ ಎಂಬ ಕಾರಣಕ್ಕೆ ಒಂದೇ ಒಂದು ಹಳ್ಳಿ, ಒಬ್ಬ ವ್ಯಕ್ತಿಯೂ ಬೇರೆಡೆಗೆ ಹೋಗಬಾರದು. ಇದು ರಾಜ್ಯ ಸರ್ಕಾರದ ಜವಾಬ್ದಾರಿ. ಗಡಿಭಾಗದ ಸಂಬಂಧಪಟ್ಟವರಿಗೆ ಅವರ ಬೇಡಿಕೆಯಂತೆ ಆ ಪ್ರದೇಶದಲ್ಲಿ ಕೆಲಸ ಹೇಗೆ ಸಿಗುತ್ತದೆ ಎಂಬುದನ್ನು ಪರಿಶೀಲಿಸುವಂತೆ ಶಂಭುರಾಜ್ ದೇಸಾಯಿ, ಚಂದ್ರಕಾಂತ್ ಪಾಟೀಲ, ದೀಪಕ್ ಕೇಸರಕರ್, ಉದಯ್ ಸಾಮಂತ್ ಅವರಿಗೆ ಸೂಚಿಸಿದ್ದೇನೆ. ಕೂಡಲೇ ಉದಯ್ ಸಾಮಂತ್ ಆ ಭಾಗಕ್ಕೆ ಹೋಗುತ್ತಾರೆ’ ಎಂದಿದ್ದಾರೆ.