ಮುಂಬೈ: ಶಾಸಕ ಅಜಯ್ ಚೌಧರಿ ಅವರನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನಾ ಗುಂಪಿನ ನಾಯಕನಾಗಿ ನೇಮಕ ಮಾಡಿರುವುದಕ್ಕೆ ಅನುಮೋದನೆ ನೀಡಿರುವುದಾಗಿ ಡೆಪ್ಯುಟಿ ಸ್ಪೀಕರ್ ನರಹರಿ ಝಿರ್ವಾಳ ಗುರುವಾರ ಹೇಳಿದ್ದಾರೆ.
ಬಂಡಾಯ ಶಾಸಕ ಏಕನಾಥ್ ಶಿಂಧೆ ಬದಲಿಗೆ ಚೌಧರಿ ಅವರನ್ನು ಸದನದಲ್ಲಿ ಶಿವಸೇನಾ ಗುಂಪಿನ ನಾಯಕರನ್ನಾಗಿ ನೇಮಕ ಮಾಡಲಾಗಿದೆ.
ಸರ್ಕಾರದ ವಿರುದ್ಧ ಬಂಡಾಯವೆದ್ದು ಪಕ್ಷದ ಕೆಲ ಶಾಸಕರೊಂದಿಗೆ ಶಿಂಧೆ ಅವರು ಮಂಗಳವಾರ ಸೂರತ್ಗೆ ಪ್ರಯಾಣಿಸಿದ್ದರು. ಇದಾದ ಕೆಲವೇ ಗಂಟೆಗಳ ನಂತರ ಪಕ್ಷವು ಅವರನ್ನು ನಾಯಕ ಸ್ಥಾನದಿಂದ ತೆಗೆದು ಹಾಕಿತ್ತು.