ವಡೋದರಲ್ಲಿ ನಡೆದ ‘ಗುಜರಾತ್ ಗೌರವ್ ಅಭಿಯಾನ’ ರ್ಯಾಲಿಯಲ್ಲಿ ಗರ್ಭಿಣಿಯರಿಗೆ ಅಗತ್ಯ ಪೌಷ್ಟಿಕಾಂಶ ಒದಗಿಸುವ ಉದ್ದೇಶದ ಗುಜರಾತ್ ಸರ್ಕಾರದ ₹ 800 ಕೋಟಿ ವೆಚ್ಚದ ‘ಮುಖ್ಯಮಂತ್ರಿ ಮಾತೃಶಕ್ತಿ ಯೋಜನೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಇಂದು ಭಾರತವು ಮಹಿಳೆಯರ ಅಗತ್ಯತೆ– ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುತ್ತಿದೆ, ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಸಶಸ್ತ್ರ ಪಡೆಗಳಿಂದ ಹಿಡಿದು ಗಣಿಗಳವರೆಗೆ ಮಹಿಳೆಯರು ತಮ್ಮ ಇಷ್ಟದ ವೃತ್ತಿಗೆ ಸೇರಲು ನಮ್ಮ ಸರ್ಕಾರ ಎಲ್ಲಾ ಬಾಗಿಲುಗಳನ್ನು ತೆರೆದಿದೆ’ ಎಂದರು.