ಶಿವಸೇನಾ ಮುಖವಾಣಿಯಾದ ‘ಸಾಮ್ನಾ’ದಲ್ಲಿ ಈ ಬಗ್ಗೆ ಅವರು ಲೇಖನ ಬರೆದಿದ್ದು, ‘ಖರ್ಗೋನ್ನಲ್ಲಿ ನಡೆದ ಘಟನೆಯಿಂದ ಶ್ರೀರಾಮನೂ ಪ್ರಕ್ಷುಬ್ಧನಾಗುತ್ತಾನೆ. ಚನಾವಣೆಯಲ್ಲಿ ಗೆಲ್ಲಲು ಬಿಜೆಪಿ ದೇಶವನ್ನು ಒಡೆಯುತ್ತಿದೆ. ಯಾರು ಚುನಾವಣೆಯಲ್ಲಿ ಗೆಲ್ಲುವುದಕ್ಕೋಸ್ಕರ ಕೋಮು ವೈಷಮ್ಯದ ಬೆಂಕಿ ಹಚ್ಚುತ್ತಾರೋ, ಅವರು ಎರಡನೇ ಬಾರಿಗೆ ದೇಶವನ್ನು ಒಡೆಯುವ ಪ್ರಯತ್ನಕ್ಕೆ ಬೀಜ ಬಿತ್ತುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.