ಪ್ರತಿ ರಾಜ್ಯಕ್ಕೂ ಭೇಟಿ ನೀಡಲಿರುವ ನಡ್ಡಾ ಅವರು, ವರ್ಚುವಲ್ ಸಭೆಯ ಮೂಲಕ ಬೂತ್ಮಟ್ಟದ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಿದ್ದಾರೆ. ಪಕ್ಷದ ಪ್ರತಿ ಶಾಸಕ, ಸಂಸದ, ಹಿರಿಯ ಮುಖಂಡರು, ಜಿಲ್ಲೆಯ ಮುಖ್ಯಸ್ಥರು ಹೀಗೆ ಎಲ್ಲರೊಂದಿಗೂ ಸಭೆ ನಡೆಸಲಿದ್ದಾರೆ. ತಳಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲು ನಡ್ಡಾ ಅವರು ಕೆಲವು ಬೂತ್ಗಳಿಗೂ ಭೇಟಿ ನೀಡಲಿದ್ದಾರೆ ಎಂದು ಸಿಂಗ್ ವಿವರಿಸಿದರು.