‘ಇದು ಸುಳ್ಳು ಸುದ್ದಿ. ಇದು ಕೇರಳದಲ್ಲಿನ ಪುರಾತನ ದೇವಾಲಯವಲ್ಲ. ಬದಲಿಗೆ ಮಂಗಳೂರಿನ ಬಂದರ್ನಲ್ಲಿರುವ ಝೀನತ್ ಬಕ್ಷ್ ಮಸೀದಿ. ಇದು 1,400 ವರ್ಷಗಳಷ್ಟು ಪುರಾತನವಾದುದು ಮತ್ತು ಕರ್ನಾಟಕದಲ್ಲೇ ಅತ್ಯಂತ ಹಳೆಯದ್ದು. ಟಿಪ್ಪು ಸುಲ್ತಾನ್ ಇದನ್ನು ನವೀಕರಣ ಮಾಡಿದ್ದ. ಈ ಮಸೀದಿಯ ಬಗ್ಗೆ ಥೌಸಂಡ್ಸ್ ಷೇಡ್ಸ್ ಆಫ್ ಇಂಡಿಯಾ ಎಂಬ ಇನ್ಸ್ಟಾಗ್ರಾಂ ಪುಟವು ಸಾಕ್ಷ್ಯಚಿತ್ರ ಪ್ರಸಾರ ಮಾಡಿತ್ತು. ಅದನ್ನೇ ಬಳಸಿಕೊಂಡು, ಮುಸ್ಲಿಮರು ಪುರಾತನ ಮಂದಿರವನ್ನು ವಶಕ್ಕೆ ಪಡೆದಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ’ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ.