‘ವರದಕ್ಷಿಣೆಗಾಗಿ ತನ್ನ ಮಗಳಿಗೆ ಆಕೆಯ ಪತಿ, ಸೋದರ ಮಾವ, ನಾದಿನಿ, ಅತ್ತೆ ಕಿರುಕುಳ ನೀಡುತ್ತಿದ್ದರು. ಥಳಿಸುತ್ತಿದ್ದರು. ತಮ್ಮ ಬೇಡಿಕೆ ಈಡೇರಿಸದಿದ್ದರೆ ಕೊಲ್ಲುವುದಾಗಿಯೂ ಬೆದರಿಕೆಯೊಡ್ಡಿದ್ದರು. 2018ರ ಜುಲೈ 24ರಂದು ರಾತ್ರಿ 8 ಗಂಟೆಗೆ ಇದೇ ಕಾರಣಕ್ಕಾಗಿ ತನ್ನ ಮಗಳನ್ನು ಥಳಿಸಿದ್ದಾರೆ. ಬಳಿಕ ಆಕೆಯ ಕುತ್ತಿಗೆ ನೇಣು ಬಿಗಿದು, ಹತ್ಯೆಗೈದಿದ್ದಾರೆ ಎಂದುಸಂತ್ರಸ್ತೆಯ ತಂದೆ ಜುಲೈ 25, 2018ರಲ್ಲಿಗೋರಖ್ಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ಹೇಳಿದ್ದಾರೆ.