ರಾಜ್ಯದ ಆಡಳಿತರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪರೋಕ್ಷವಾಗಿ ಉಲ್ಲೇಖಿಸಿದ ಅವರು, ‘ಕುಟುಂಬ ಆಧರಿತ ಪಕ್ಷಗಳು ಹೇಗೆ ಕುಟುಂಬದ ಏಳಿಗೆಯನ್ನಷ್ಟೇ ಬಯಸಲಿವೆ ಎಂಬುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ.ಈ ಪಕ್ಷಗಳು ಎಂದಿಗೂ ಬಡವರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ನಿರ್ದಿಷ್ಟ ಕುಟುಂಬಕ್ಕಷ್ಟೇ ಬದ್ಧವಾದ ಪಕ್ಷದಲ್ಲಿ ಭ್ರಷ್ಟಾಚಾರ ಹೇಗೆ ಹಾಸುಹೊಕ್ಕಾಗಿದೆ ಎಂಬುದನ್ನು ದೇಶ ನೋಡಿದೆ’ ಎಂದು ಹೇಳಿದರು.