ಮತ್ತೊಂದು ಪ್ರತ್ಯೇಕ ಟ್ವೀಟ್ನಲ್ಲಿ ಅಖಿಲೇಶ್ ಯಾದವ್ ಅವರು, ‘ಲಖಿಂಪುರ ಕಿಸಾನ್ ಸ್ಮೃತಿ ದಿನ‘ವನ್ನು ಆಚರಿಸುವಂತೆ ಉತ್ತರ ಪ್ರದೇಶದ ನಾಗರಿಕರು, ರೈತರ ಹಿತೈಷಿಗಳು, ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರಪಕ್ಷಗಳ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ರೈತರ ನೆನಪಿಗಾಗಿ ‘ಕಿಸಾನ್ ಸ್ಮೃತಿ ದೀಪ‘ವನ್ನು(ಮಣ್ಣಿನ ದೀಪವನ್ನು) ಬೆಳಗಿಸುವ ಮೂಲಕ ಲಖಿಂಪುರದಲ್ಲಿ ಸಾವನ್ನಪ್ಪಿದ ರೈತರಿಗೆ ಗೌರವ ಸಲ್ಲಿಸುವಂತೆ ಮನವಿ ಮಾಡಿದ್ದರೆ.