ಮೆರವಣಿಗೆ ನಡೆಸಲು ದೆಹಲಿ ಪೊಲೀಸ್ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ನೀಡಿದ್ದ ಪ್ರಸ್ತಾವವನ್ನು ರೈತರ ಸಂಘಟನೆಗಳು ನಿರಾಕರಿಸಿವೆ. ಸಂಸತ್ತನ್ನು ಮುತ್ತಿಗೆ ಹಾಕಲು ಅಥವಾ ಬಲವಂತವಾಗಿ ಕಟ್ಟಡವನ್ನು ಪ್ರವೇಶಿಸುವ ಯಾವುದೇ ಉದ್ದೇಶ ಇಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.