‘ನರಮೇಧ ಅಪರಾಧ ತಡೆ ಹಾಗೂ ಶಿಕ್ಷೆ(ಸಿಪಿಪಿಸಿಜಿ)’ ಕುರಿತ ಒಪ್ಪಂದಕ್ಕೆ ಭಾರತವು ಸಹಿ ಹಾಕಿದ್ದು, ಈ ಒಪ್ಪಂದ ಕಲಂ 3 ಸಿ ಅಡಿ ಪ್ರಕಾರ ನೇರ ಹಾಗೂ ಸಾರ್ವಜನಿಕವಾಗಿ ಮುಸ್ಲಿಮರ ನರಮೇಧಕ್ಕೆ ಕರೆ ಕೊಡುವುದು ಅಪರಾಧವಾಗುತ್ತದೆ. ದೇಶದ ಐಕ್ಯತೆ ಹಾಗೂ ಶಾಂತಿ ಸುವ್ಯವಸ್ಥೆಗೆ ವಿರುದ್ಧವಾದ ಇಂತಹ ಹೇಳಿಕೆಗಳ ವಿರುದ್ಧ ಭಾರತದ ಕಾನೂನು ವ್ಯವಸ್ಥೆಯಡಿ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸಬಹುದು’ ಎಂದು ಅವರು ವಿವರಿಸಿದರು.