ತಿರುವನಂತಪುರ: ಕೇರಳದ ಕಣ್ಣೂರಿನಲ್ಲಿ ಮನೆಯಲ್ಲಿಯೇ ಕಚ್ಚಾ ಬಾಂಬ್ ಒಂದು ಸ್ಫೋಟಗೊಂಡ ಪರಿಣಾಮ ತಂದೆ ಮತ್ತು ಮಗ ಸಾವಿಗೀಡಾದ ಘಟನೆ ವರದಿಯಾಗಿದೆ.
ಗುಜರಿ ಹೆಕ್ಕಿ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದ ಫೈಝಲ್ ಖಾನ್, ತಮಗೆ ದೊರೆತಿದ್ದ ಸ್ಟೀಲ್ ಡಬ್ಬವೊಂದನ್ನು ಮನೆಗೆ ತಂದು ತೆರೆದಾಗ ಅದು ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಬ್ ಸ್ಫೋಟದ ತೀವ್ರತೆಗೆ ಫೈಝಲ್ ಖಾನ್(45) ಮತ್ತು ಅವರ ಪುತ್ರ ಶಾಹೀದುಲ್(22) ಮೃತಪಟ್ಟಿದ್ದಾರೆ.
ಇವರು ಅಸ್ಸಾಂನವರಾಗಿದ್ದು, ಕಣ್ಣೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಸ್ಫೋಟದಿಂದಾಗಿ ಮನೆಯ ಛಾವಣಿ ಕೂಡ ಛಿದ್ರಗೊಂಡಿದೆ. ಸ್ಫೋಟಕದಲ್ಲಿ ಏನು ಬಳಸಲಾಗಿತ್ತು ಮತ್ತು ಅದು ಎಲ್ಲಿಂದ ಲಭ್ಯವಾಗಿತ್ತು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.