ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗದಿಂದ ವಜಾ ಮಾಡಿದ್ದಕ್ಕೆ ಕಾರುಗಳ ಮೇಲೆ ಆ್ಯಸಿಡ್ ಸುರಿದ ವ್ಯಕ್ತಿ!

Last Updated 16 ಮಾರ್ಚ್ 2023, 13:10 IST
ಅಕ್ಷರ ಗಾತ್ರ

ನೋಯ್ಡಾ: ನಿವಾಸಿಗಳ ಸಂಘದ ಬಡಾವಣೆಯೊಂದರಲ್ಲಿ ಕಾರು ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿಯೊಬ್ಬ, ತನ್ನನ್ನು ಕೆಲಸದಿಂದ ವಜಾಗೊಳಿಸಿದ್ದಾರೆಂಬ ಸಿಟ್ಟಿಗೆ ಹತ್ತಾರು ಕಾರುಗಳನ್ನು ಆ್ಯಸಿಡ್ ಸುರಿದು ಹಾನಿಗೊಳಿಸಿದ ಘಟನೆ ಗುರುವಾರ ನಡೆದಿದೆ.

ಕಾರಿನ ಮಾಲೀಕರು ನೀಡಿದ ದೂರಿನ ಮೇರೆಗೆ ಆತನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 25 ವರ್ಷದ ರಾಮರಾಜ್‌ ಎಂಬಾತನನ್ನು ಬಂಧಿಸಲಾಗಿದೆ. 2016ರಿಂದ ಈತ ಈ ಬಡಾವಣೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇಲ್ಲಿನ ಮ್ಯಾಕ್ಸ್‌ಬ್ಲಿಸ್‌ ವೈಟ್‌ ಹೌಸ್‌ ಸೊಸೈಟಿಯಲ್ಲಿ ಘಟನೆ ನಡೆದಿದೆ. ಕೆಲವು ನಿವಾಸಿಗಳು ಆತನ ಕೆಲಸದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಬುಧವಾರ ಬಡಾವಣೆಗೆ ಬಂದ ಆತ ಹತ್ತಾರು ಕಾರುಗಳನ್ನು ಆ್ಯಸಿಡ್ ಸುರಿದು ಹಾನಿಗೊಳಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ಕಾರುಗಳನ್ನು ಹಾನಿಗೊಳಿಸಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT