‘ಇಂಡಿಯಾ ಗೇಟ್: ಭದ್ರತಾ ಸಿಬ್ಬಂದಿ ಮೇಲೆ ಆಹಾರ ಮಾರಾಟಗಾರರ ಹಲ್ಲೆ’
ನವದೆಹಲಿ (ಪಿಟಿಐ): ಇಂಡಿಯಾ ಗೇಟ್ ಬಳಿ ಆಹಾರ ಮಾರಾಟ ನಿರ್ಬಂಧದ ವಿಚಾರವಾಗಿ ಖಾಸಗಿ ಭದ್ರತಾ ಸಿಬ್ಬಂದಿ ಹಾಗೂ ಆಹಾರ ಮಾರಾಟಗಾರರ ಮಧ್ಯೆ ಹೊಡೆದಾಟ ನಡೆದಿದ್ದು, ಐವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಶಹಜಹಾನ್ ರಸ್ತೆಯಲ್ಲಿರುವ ಚಿಲ್ಡ್ರನ್ ಪಾರ್ಕ್ನಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ಮಾಹಿತಿ ನೀಡಿದರು.
‘ಇಂಡಿಯಾ ಗೇಟ್ ಪ್ರದೇಶದಲ್ಲಿ ಆಹಾರ ಮಾರಾಟಕ್ಕೆ ನಿರ್ಬಂಧವಿದೆ. ಆದ್ದರಿಂದ ಆಹಾರ ಮಾರಾಟ ಮಾಡದಂತೆ ಆಹಾರ ಮಾರಾಟಗಾರರಿಗೆ ತಿಳಿಸಲಾಯಿತು. ಮಧ್ಯಾಹ್ನ ಸುಮಾರು 3.30ರ ವೇಳೆಗೆ ಅಂಗಡಿಗಳ ಸಾಮಾನುಗಳನ್ನು ಟ್ರಕ್ನಲ್ಲಿ ತುಂಬಿಕೊಳ್ಳಲು ಮುಂದಾದಾಗ ಸಿಟ್ಟಿಗೆದ್ದ ಆಹಾರ ಮಾರಾಟಗಾರರು ಭದ್ರತಾ ಸಿಬ್ಬಂದ ಮೇಲೆ ಕಲ್ಲು ತೂರಾಟ ನಡೆಸಿದರು. ಕೋಲುಗಳಿಂದ ಹಲ್ಲೆಗೆ ಮಾಡಿದರು’ ಎಂದು ಉಪ ಪೊಲೀಸ್ ಆಯುಕ್ತ (ನವದೆಹಲಿ) ಪ್ರಣವ್ ತಾಯಲ್ ವಿವರಿಸಿದರು.
‘ಮಾರಾಟಗಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದರು.
ಭದ್ರತಾ ಸಿಬ್ಬಂದಿ ಹಾಗೂ ಮಾರಾಟಗಾರರ ಮಧ್ಯ ನಡೆದ ಹೊಡೆದಾಟದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.