‘ಇಂಡಿಯಾ ಗೇಟ್ ಪ್ರದೇಶದಲ್ಲಿ ಆಹಾರ ಮಾರಾಟಕ್ಕೆ ನಿರ್ಬಂಧವಿದೆ. ಆದ್ದರಿಂದ ಆಹಾರ ಮಾರಾಟ ಮಾಡದಂತೆ ಆಹಾರ ಮಾರಾಟಗಾರರಿಗೆ ತಿಳಿಸಲಾಯಿತು. ಮಧ್ಯಾಹ್ನ ಸುಮಾರು 3.30ರ ವೇಳೆಗೆ ಅಂಗಡಿಗಳ ಸಾಮಾನುಗಳನ್ನು ಟ್ರಕ್ನಲ್ಲಿ ತುಂಬಿಕೊಳ್ಳಲು ಮುಂದಾದಾಗ ಸಿಟ್ಟಿಗೆದ್ದ ಆಹಾರ ಮಾರಾಟಗಾರರು ಭದ್ರತಾ ಸಿಬ್ಬಂದ ಮೇಲೆ ಕಲ್ಲು ತೂರಾಟ ನಡೆಸಿದರು. ಕೋಲುಗಳಿಂದ ಹಲ್ಲೆಗೆ ಮಾಡಿದರು’ ಎಂದು ಉಪ ಪೊಲೀಸ್ ಆಯುಕ್ತ (ನವದೆಹಲಿ) ಪ್ರಣವ್ ತಾಯಲ್ ವಿವರಿಸಿದರು.