ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುದುಚೇರಿ: ಐವರು ಸಂಪುಟಕ್ಕೆ ಸೇರ್ಪಡೆ

Last Updated 27 ಜೂನ್ 2021, 11:50 IST
ಅಕ್ಷರ ಗಾತ್ರ

ಪುದುಚೇರಿ: ಇಲ್ಲಿನ ಎನ್‌ಡಿಎ ಸರ್ಕಾರದ ಸಚಿವ ಸಂಪುಟಕ್ಕೆ ಐವರನ್ನು ಭಾನುವಾರ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಎನ್‌. ರಂಗಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ತಿಂಗಳ ಬಳಿಕ ಸಂಪುಟ ವಿಸ್ತರಿಸಲಾಗಿದೆ.

ಬಿಜೆಪಿಯ ಎ. ನಮಶಿವಾಯಂ ಮತ್ತು ಎ.ಕೆ. ಸಾಯ್‌ ಜೆ. ಶರವಣ ಕುಮಾರ್‌ ಹಾಗೂ ಎಐಎನ್‌ಆರ್‌ಸಿಯ ಕೆ. ಲಕ್ಷ್ಮೀನಾರಾಯಣ, ಸಿ. ಜಿಯಾಕೌಮಾರ್‌, ಚಂದಿರಾ ಪ್ರಿಯಾಂಗಾ ಅವರು ಸಚಿವರಾಗಿ ರಾಜ್‌ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್‌ ಪ್ರಮಾಣ ವಚನ ಬೋಧಿಸಿದರು.

ಪುದುಚೇರಿಯಲ್ಲಿ ಇದೇ ಪ್ರಥಮ ಬಾರಿ ಬಿಜೆಪಿ ಸರ್ಕಾರದ ಭಾಗವಾಗಿದೆ. ಜತೆಗೆ, ಚಂದಿರಾ ಪ್ರಿಯಾಂಗಾ ಅವರು ಸುಮಾರು ನಾಲ್ಕು ದಶಕಗಳಲ್ಲಿ ಸಚಿವರಾಗಿರುವ ಮೊದಲ ಮಹಿಳೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT