ಮಿರ್ವೈಜ್ ಉಮೇರ್ ಫಾರೂಕ್ ನೇತೃತ್ವದ ಹುರಿಯತ್ ವಕ್ತಾರ ಹೇಳಿಕೆ ನೀಡಿದ್ದು, ‘ಜನರನ್ನು ಹಿಂಸಿಸಲು ಮತ್ತು ಭಯ ಮೂಡಿಸಲು ಬಂಧನವನ್ನು ಆಯುಧವಾಗಿ ಮಾಡಿಕೊಳ್ಳಲಾಗಿದೆ. ಧಾರ್ಮಿಕ ವಿದ್ವಾಂಸರು ಸೇರಿದಂತೆ ನೂರಾರು ಕಾಶ್ಮೀರಿಗಳು ತಮ್ಮ ವಯಸ್ಸು ಮತ್ತು ಹಿನ್ನೆಲೆ ಲೆಕ್ಕಿಸದೆ, ವಿಚಾರಣೆ ವಿಳಂಬದಿಂದ ಕಠಿಣ ಕಾನೂನುಗಳ ಅಡಿ ಜೈಲು ಮತ್ತು ಬಂಧನ ಕೇಂದ್ರಗಳಲ್ಲಿ ಕೊಳೆಯುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.